Main Centers
International Centers
India
USA
Wisdom
FILTERS:
SORT BY:
ಇಂದ್ರಿಯಸುಖವು ಸಂತೋಷದ ನೆರಳಷ್ಟೆ. ನಿಮ್ಮೊಳಗೆ ಸಂತೋಷವು ಇಲ್ಲದಿದ್ದಾಗ, ನೀವು ಸುಖವನ್ನು ಅರಸುತ್ತೀರಿ.
ನಿಮ್ಮ ಬದುಕು ನಿಮ್ಮದೇ ರಚನೆ. ದೇವರು ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ.
ಗತಕಾಲವನ್ನು ನೀವು ನೆನಪಿಟ್ಟುಕೊಳ್ಳಬಲ್ಲಿರಿ. ವರ್ತಮಾನವನ್ನು ಅನುಭವಿಸಬಲ್ಲಿರಿ. ಆದರೆ ಭವಿಷ್ಯವನ್ನು ರೂಪಿಸಬಲ್ಲಿರಿ.
ನೀವು ಮಾಡುವ ಪ್ರತಿಯೊಂದು ಕೆಲಸವೂ ಒಂದು ಸಮರ್ಪಣೆಯಾದಾಗ, ಕರ್ಮವು ನಿಮ್ಮನ್ನು ಬಂಧಿಸದು.
ನಿಮಗೆ ನಿಜವಾಗಿಯೂ ಕಾಳಜಿಯಿರುವುದರಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡಿದ್ದರೆ, ನಿಮ್ಮ ಇಡೀ ಬದುಕೇ ರಜಾದಂತಿರುತ್ತದೆ.
ಮಾರುಕಟ್ಟೆಯಲ್ಲಿ ಯಾರು ಕಡಿಮೆ ಕೊಟ್ಟು ಜಾಸ್ತಿ ಕೊಳ್ಳುತ್ತಾರೋ ಅವರೇ ಜಾಣರೆನಿಸಿಕೊಳ್ಳುತ್ತಾರೆ. ಆದರೆ ಒಂದು ನಿಜವಾದ ಸಂಬಂಧದಲ್ಲಿ ನಿಮಗೇನು ಸಿಗುತ್ತದೆ ಎಂಬ ಪರಿವೆಯೇ ಇಲ್ಲದೆ ನೀವು ನಿಮಗೆ ಸಾಧ್ಯವಿರುವುದನ್ನೆಲ್ಲ ನೀಡಬೇಕು.
ಅಂತಿಮವಾಗಿ ಜೀವನವು ನರಳಾಟವೂ ಅಲ್ಲ, ಆನಂದವೂ ಆಲ್ಲ. ಅದು ನೀವು ಮಾಡಿಕೊಂಡಂತೆ ಅಷ್ಟೆ.
ಜೀವಂತವಾಗಿರುವ ನಿಮ್ಮ ಅನುಭವವು ಪ್ರಬುದ್ಧವಾಯಿತೆಂದರೆ, ನಂತರ ನೀವು ಮಾಡುವುದೆಲ್ಲವೂ ಪ್ರಬುದ್ಧವಾಗುವುದು.
From amoeba to elephant, all creatures nourish the ecology. Only we humans are in destruction mode, and we think we are brilliant.
ಪ್ರೀತಿಯು ಯಾವಾಗಲೂ ಮುಕ್ತಗೊಳಿಸುವ ಪ್ರಕ್ರಿಯೆಯಾಗಬೇಕು, ಬಂಧಿಸುವ ಪ್ರಕ್ರಿಯೆಯಲ್ಲ.
ನಿನ್ನೆಯನ್ನು ತಿದ್ದಲು ಸಾಧ್ಯವಿಲ್ಲ, ಆದರೆ ನಾಳೆಯನ್ನು ನಿರ್ಮಿಸಬಹುದು.
ಮನುಷ್ಯರಾಗಿ ಹುಟ್ಟಿರುವುದರ ಮಹತ್ವವೇನೆಂದರೆ, ನಿಮಗೆ ಅಪರಿಮಿತರಾಗುವ ಸಾಮರ್ಥ್ಯವಿದೆ. ನಿಮ್ಮ ದೈವತ್ವವನ್ನು ಜೀವಂತವಾಗಿಸುವುದು ನಿಮಗೆ ಬಿಟ್ಟಿದ್ದು.