Main Centers
International Centers
India
USA
Wisdom
FILTERS:
SORT BY:
ನಿಮ್ಮ ಮನಸ್ಸಿನಲ್ಲಿ, ಭಾವನೆಗಳಲ್ಲಿ, ಮತ್ತು ದೇಹದಲ್ಲಿ ನಿಮಗೆ ಬೇಕಾದಂತಹ ವಾತಾವರಣವನ್ನು ನೀವು ಸೃಷ್ಟಿಸಿಕೊಳ್ಳಬಲ್ಲಿರಾದರೆ, ನಿಮ್ಮ ಆರೋಗ್ಯ, ಸಂತೋಷ, ಮತ್ತು ಒಳಿತುಗಳ ಬಗ್ಗೆ ನೀವು ಚಿಂತಿಸುವ ಅಗತ್ಯವಿಲ್ಲ.
ನಿಮಗೆ ಇಷ್ಟವಾದ ವಿಷಯಗಳ ಮಿತಿಯೊಳಗೆ ತಳವೂರುವುದಕ್ಕಿಂತ ನಿಮ್ಮ ಮಿತಿಗಳನ್ನು ಮೀರಿ ಹೋಗುವುದು ಅದೆಷ್ಟೋ ಹೆಚ್ಚು ಮುಖ್ಯವಾದುದು.
ನಿಮ್ಮ ಜೊತೆ ಏನೇ ನಡೆದರೂ, ಅದನ್ನು ನೀವೊಂದು ಶಾಪವಾಗಿ ನೋಡಿ ನರಳಬಹುದು, ಅಥವಾ ಒಂದು ವರವಾಗಿ ನೋಡಿ ಅದನ್ನು ಉಪಯೋಗಪಡಿಸಿಕೊಳ್ಳಬಹುದು.
ಬದುಕನ್ನು ಸಮೃದ್ಧವೂ, ಧನ್ಯವೂ ಆಗಿಸುವುದು ನೀವೆಷ್ಟು ಕೆಲಸ ಮಾಡಿದಿರಿ ಎಂಬುದಲ್ಲ, ಬದಲಿಗೆ ಬದುಕನ್ನು ಎಷ್ಟು ಆಳವಾಗಿ ಅನುಭವಿಸಿದಿರಿ ಎಂಬುದು.
ನೀವು ಜೀವನದ ಬಗ್ಗೆ ಆಳವಾದ ಒಳನೋಟಗಳನ್ನು ಹೊಂದಲು ಬಯಸಿದರೆ, ನಿಮ್ಮ ಬಗ್ಗೆ ಇತರರ ಅಭಿಪ್ರಾಯಗಳಿಗೆ ಯಾವುದೇ ಮಹತ್ವವನ್ನು ನೀಡಬಾರದು.
ಯಾವ ಕೆಲಸವೂ ಒತ್ತಡದಿಂದ ಕೂಡಿಲ್ಲ. ಅದನ್ನು ಒತ್ತಡವಾಗಿಸುವುದು ನಿಮ್ಮ ದೇಹ, ಮನಸ್ಸು, ಮತ್ತು ಭಾವನೆಗಳನ್ನು ನಿಭಾಯಿಸುವಲ್ಲಿನ ನಿಮ್ಮ ಅಸಾಮರ್ಥ್ಯ.
ಜೀವನ್ಮರಣಗಳು ಉಚ್ಛ್ವಾಸ-ನಿಶ್ವಾಸಗಳಂತೆ. ಅವು ಸದಾ ಒಟ್ಟಾಗಿಯೇ ಇರುತ್ತವೆ.
If you want to know whether you are moving forward in life, just see if you are a little more joyful today than you were yesterday.
ಸಂಕಷ್ಟದ ಸಮಯಗಳ ಮೂಲಕ ನೀವು ಆಂತರಿಕ ಸಂತುಲನೆಯೊಂದಿಗೆ ಸಾಗಬಲ್ಲಿರಾದರೆ, ನಾವು ಎದುರಿಸುವ ಪ್ರತಿಯೊಂದು ಸನ್ನಿವೇಶವೂ ನಮ್ಮ ಜೀವನವನ್ನು ವರ್ಧಿಸಿಕೊಳ್ಳಲು ಒಂದು ಅವಕಾಶ ಎಂಬುದನ್ನು ನೀವು ನೋಡುವಿರಿ.
ಧ್ಯಾನ ಎಂಬುದು ನಿಮ್ಮ ಅಸ್ತಿತ್ವದ ಸೊಬಗನ್ನು ಅರಿಯಲು ಒಂದು ಸಾಧನ.
ನೀವು ಏನನ್ನೇ ಮಾಡಿದರೂ, ಅದನ್ನು ಮನಃಪೂರ್ವಕವಾಗಿ ಮಾಡಬಹುದು, ಅಥವಾ ಒಲ್ಲದ ಮನಸ್ಸಿನಿಂದ ಮಾಡಬಹುದು. ಮನಃಪೂರ್ವಕವಾಗಿ ಮಾಡಿದರೆ, ಅದು ಸ್ವರ್ಗವಾಗುವುದು. ಒಲ್ಲದ ಮನಸ್ಸಿನಿಂದ ಮಾಡಿದರೆ, ಅದು ನರಕವಾಗುವುದು.